Slide
Slide
Slide
previous arrow
next arrow

ಮನೆ ಮೇಲೆ ತೆಂಗಿನಮರ ಬಿದ್ದು ಅಪಾರ ಹಾನಿ

300x250 AD

ಹೊನ್ನಾವರ: ತಾಲೂಕಿನಲ್ಲಿ ಮಂಗಳವಾರ ಸುರಿದ ಗಾಳಿ ಮಳೆಗೆ ಮನೆಯೊಂದರ ಮೇಲೆ ತೆಂಗಿನ ಮರ ಬಿದ್ದು ಹಾನಿಯಾದ ಘಟನೆ ನಡೆದಿದೆ.

ಖರ್ವಾ ಗ್ರಾಮದ ನಾಥಗೇರಿಯ ರಾಮ ಗಣಪ ನಾಯ್ಕ ಎನ್ನುವವರ ಮನೆಯ ಮೇಲೆ ಮಂಗಳವಾರ ಬೆಳಗಿನ ಜಾವ ಬುಡಸಹಿತ ತೆಂಗಿನಮರ ಕಿತ್ತುಬಿದ್ದಿದ್ದು ಭಾಗಶಃ ಹಾನಿಯಾಗಿದೆ.ಮನೆಯ ಸದಸ್ಯರು ಮನೆಯಲ್ಲಿ ಮಲಗಿದ್ದ ವೇಳೆ ಘಟನೆ ನಡೆದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ, ಗಾಯನೋವು ಸಂಭವಿಸಿಲ್ಲ.ಮನೆಯ ಪಕಾಸು, ರೀಪು,ತಗಡಿನ ಶಿಟ್‌ಗೆ ಜತೆಗೆ ಮನೆಯ ಗೊಡೆ,ಪಿಲ್ಲರ್‌ಗು ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಸುಪ್ರಿತಾ ಆಚಾರ್ಯ ಭೇಟಿ ನೀಡಿದ್ದು,ಹಾನಿ ಅಂದಾಜು ಪರಿಶೀಲಿಸಿದ್ದಾರೆ. ಇನ್ನು ತೆಂಗಿನ ಮರ ಕಿತ್ತು ಮನೆಯ ಮೇಲೆಬಿದ್ದ ನಂತರ ನೆಲಕ್ಕಪ್ಪಳಿಸಿದ್ದು, ಮನೆಯ ಬಳಿ ನಿಲ್ಲಿಸಿಟ್ಟ ಬೈಕ್ ಗು ಬಡಿದಿದ್ದು,ಬೈಕ್ ಹಿಂಭಾಗಕ್ಕೆ ಹಾನಿ ಸಂಭವಿಸಿದೆ.

300x250 AD
Share This
300x250 AD
300x250 AD
300x250 AD
Back to top